Tuesday 21 May 2013

ಎಲ್ಲವೂ ಕನ್ನಡಮಯವಾಗಲಿ ಕಂಪ್ಯೂಟರ್ ಕೂಡ..


*ಕನ್ನಡರತ್ನ ಸತೀಶ್
Kannada computer, Computer Kannadaಯಾವುದೇ ಒಂದು ಭಾಷೆಯ ಉಳಿವು. ಆ ಭಾಷೆಯ ಸಮರ್ಥ ಬಳಕೆಯನ್ನು ಮಾತ್ರವೇ ಅವಲಂಬಿಸಿರುತ್ತದೆ. ಎಲ್ಲ ಭಾಷೆಗಳಿಗೂ ಬೇರು ಎಂದು (ಈ ಬಗ್ಗೆ ಜಿಜ್ಞಾಸೆಯೂ ಇದೆ) ಹೇಳಲಾಗುವ ಸಂಸ್ಕೃತದ ಅತ್ಯಂತ ಶ್ರೀಮಂತ ಭಾಷೆ. ಪಂಡಿತರ ಭಾಷೆಯಾಗಿದ್ದ ಸಂಸ್ಕೃತ ಬಳಸುವ ಜನರಿಲ್ಲದೆ ಇಂದು ಕಣ್ಮರೆಯಾಗಿಯೇ ಬಿಟ್ಟಿದೆ.  ಇಂದು ಅಂಥ ಒಂದು ಸ್ಥಿತಿಯನ್ನು ಕನ್ನಡವೂ ಎದುರಿಸುವಂತಾಗಿದೆ. ಮನೆಯಲ್ಲಿಶಾಲೆಯಲ್ಲಿಕಾಲೇಜಿನಲ್ಲಿ,ಕಾರ್ಪೊರೇಟ್ ಕಚೇರಿಗಳಲ್ಲಿ ಕನ್ನಡ ವಾತಾವರಣ ಮರೆಯಾಗುತ್ತಿದೆ. ಎಲ್ಲವೂ ಆಂಗ್ಲಮಯ. ಹೀಗಾದರೆ ಮುಂದಿನ ದಿನಗಳಲ್ಲಿ ಕನ್ನಡ ಉಳಿದೀತೆ ಎಂಬ ಪ್ರಶ್ನೆ ಸಹಜ.
ಇಂದಿನ ಯುಗಮಾನಕ್ಕೆ ಅನುಗುಣವಾಗಿ ಭಾಷೆ ಬೆಳೆದರೆ ಮಾತ್ರ ಅದು ಉಳಿಯಲು ಸಾಧ್ಯ. ಏನಿದು ಇಂದಿನ ಯುಗಮಾನ. ಇದು ಕಂಪ್ಯೂಟರ್ ಯುಗತಾಂತ್ರಿಕತೆಯ ಯುಗ. ಈಗ ಎಲ್ಲ ವ್ಯವಹಾರಗಳು ನಡೆಯುವುದೇ ಕಂಪ್ಯೂಟರ್‌ನಲ್ಲಿ. ಕ್ಷೇಮ ಶ್ರೀದಿನಾಂಕ ಹಾಕಿ ತೀರ್ಥರೂಪು... ಇವರಿಗೆ ನಮಸ್ಕಾರಗಳುಉಭಯ ಕುಶಲೋಪರಿ ಸಾಂಪ್ರತ. ಇಲ್ಲಿ ಎಲ್ಲರೂ ಕ್ಷೇಮ ಅಲ್ಲಿ ನಿಮ್ಮಗಳ ಕ್ಷೇಮಕ್ಕೆ  ಕಾಗದ ಬರೆಯುವುದು..... ಎಂದು ಆರಂಭಿಸಿ. ಇನ್ನೇನು ವಿಶೇಷವಿಲ್ಲ. ಇಂತಿ ನಮಸ್ಕಾರಗಳು ಎಂದು ಸಂಸ್ಕಾರಪೂರ್ಣವಾಗಿ ಕಾಗದ ಬರೆಯುವ ಪದ್ಧತಿಯೇ ಈಗಿಲ್ಲ.
ಈಗೇನಿದ್ದರೂ ಇ-ಮೇಲ್ಎಸ್.ಎಂ.ಎಸ್.ಗಳ ಕಾರುಭಾರು. ಇಂದು ಪತ್ರ ಎಂದು ಬರೆದರೆ ವಿದ್ಯುನ್ಮಾನ ಅಂಚೆಯ ಮೂಲಕವಷ್ಟೇ. ಹೀಗಾಗಿ ಕನ್ನಡಬಳಕೆ ಕಂಪ್ಯೂಟರ್ಮೊಬೈಲ್‌ಗಳಲ್ಲಿ ಸಾಧ್ಯವಾದರೆ. ಅದು ಸರಳವಾಗಿದ್ದರೆ,ಸರಾಗವಾಗಿದ್ದರೆಸುಲಭವಾಗಿದ್ದರೆ ಮಾತ್ರ ಕನ್ನಡ ಮುಂದಿನ ಪೀಳಿಗೆಗೆ ಉಳಿದೀತು.
ಇದನ್ನು ಅರಿತೇ ಪೂರ್ಣಚಂದ್ರ ತೇಜಸ್ವಿ ಅವರುಡಾ. ಚಂದ್ರಶೇಖರ ಕಂಬಾರರು ತಂತ್ರಜ್ಞಾನದಲ್ಲೂ ಕನ್ನಡ ಪ್ರಸ್ತುತವಾಗಬೇಕು ಎಂದು ಕೂಗಿ ಕೂಗಿಸಾರಿ ಸಾರಿ ಹೇಳಿದ್ದಾರೆ. ಆದರೂ ಈ ನಿಟ್ಟಿನಲ್ಲಿ ಗಣನೀಯ ಪ್ರಗತಿ ಆಗಿಲ್ಲ.
ಯೂನಿಕೋಡ್ ಇಂದಿನ ತಂತ್ರಜ್ಞಾನದ ಅವಿಭಾಜ್ಯ ಅಂಗವಾಗಿದೆ. ಫಾಂಟ್ ಡೌನ್‌ಲೋಡ್ ಮಾಡಿಕೊಳ್ಳದೆಯೇ ಕಂಪ್ಯೂಟರ್‌ನಲ್ಲಿ ಅಂತರ್ಜಾಲದ ನೆರವಿನಿಂದ ಕನ್ನಡವನ್ನು ನೇರವಾಗಿ ಕಾಣುವ ಸೌಲಭ್ಯ ದೊರೆತಿದ್ದೇ ಇದರಿಂದ.  ಆದರೆಯೂನಿಕೋಡ್‌ನಲ್ಲಿ ಸರಳವಾಗಿ ಕನ್ನಡವನ್ನು ಅಚ್ಚು ಮಾಡಿ ಕಂಪ್ಯೂಟರ್‌ನಲ್ಲಿ ಅಳವಡಿಸುವ ಬಗ್ಗೆ ಇನ್ನೂ ಗೊಂದಲವಿದೆ. ಹಲವರಿಗೆ ಇದು ಕಬ್ಬಿಣದ ಕಡಲೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಯೂನಿಕೋಡ್ ವಿಷಯದಲ್ಲಿ ಸಾಕಷ್ಟು ಪ್ರಗತಿ ಸಾಧ್ಯವಾಗಿಲ್ಲ. ಕನ್ನಡ ಭಾಷೆಯಲ್ಲಿ ಹಲವಾರು ತಂತ್ರಾಂಶಗಳಿವೆ. ಈ ತಂತ್ರಾಂಶ ತಯಾರಿಸಿದವರು ತಮಗೆ ಬೇಕಾದ ರೀತಿಯಲ್ಲಿ ಅದನ್ನು ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಒಂದೊಂದು ತಂತ್ರಾಂಶಕ್ಕೆ ಒಂದೊಂದು ರೀತಿಯ ಕೀಲಿಮಣೆ. ಇಂಗ್ಲಿಷ್‌ನಲ್ಲಿ ಇರುವಂತೆ ಏಕರೂಪದ ಕೀಲಿಮಣೆ ವ್ಯವಸ್ಥೆ ಕನ್ನಡದಲ್ಲಿಲ್ಲ. ಈ ಮಧ್ಯೆ ಹಲವು ತಂತ್ರಾಂಶಗಳು ಇವರಿಂದ ಅವರು ಕದ್ದಿದ್ದುಅವರಿಂದ ಇವರು ಕದ್ದಿದ್ದು ಎಂಬ ಆಪಾದನೆಗಳೂ ಇವೆ.
ಇನ್ನು ಸರ್ಕಾರವೇ ಮುಂದೆ ನಿಂತು ಮಾಡಿಸಿದ ನುಡಿ ತಂತ್ರಾಂಶದ ಸೋರ್ಸ್ ಕೋಡ್ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು. ಆಗ ಅದನ್ನು ಬಳಸಿಕೊಂಡು ಕನ್ನಡದಲ್ಲಿಯೇ ಪೂರಕ ಹಾಗೂ ಅಗತ್ಯ ತಂತ್ರಾಂಶ ಅಭಿವೃದ್ಧಿ ಪಡಿಸಲು ಸಾಧ್ಯ ಎಂಬ ಧ್ವನಿ ಕೇಳಿ ಬಂದಿದೆ. ಈ ಬಗ್ಗೆ ಹಲವು ಚರ್ಚೆಲೇಖನಗೋಷ್ಠಿಗಳು ನಡೆದಿವೆ ಆದರೆ ಪ್ರಯೋಜನವಾಗಿಲ್ಲ.
ಕಾಲ ಎಂದಿಗೂ ನಿಲ್ಲುವುದಿಲ್ಲ. ಓಡುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ನಾವು ಹೆಜ್ಜೆಹಾಕಿದಾಗ ಮಾತ್ರ ನಾವೂ ಕಾಲದ ಓಟಕ್ಕೆ ಸಾಗಲು ಸಾಧ್ಯ. ಇಲ್ಲವಾದರೆ ನಾವು ಹಿಂದುಳಿಯುತ್ತೇವೆ. ಕನ್ನಡ ಕಂಪ್ಯೂಟರ್ ಬಳಕೆ ವಿಚಾರದಲ್ಲೂ ಅದೇ ಆಗಿದೆ. ನಮಗೆ ಕಂಪ್ಯೂಟರ್ ಬಂದ ಹೊಸತರಲ್ಲಿ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ಬಳಸುವ ಪರಿಕಲ್ಪನೆ ಇರಲಿಲ್ಲ. ಅದನ್ನು ಬಳಸುವ ಅವಕಾಶ ೧೯೮೬ರಿಂದೀಚೆಗೆ ಆರಂಭವಾಯಿತು. ಆದರೆ ಕನ್ನಡ ಬಳಸುವ ಅಗತ್ಯ ೨ ದಶಕಗಳಿಂದ ವ್ಯಾಪಕವಾಯಿತು. ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಆದರೂ ಇದು ಏನೇನೂ ಸಾಲದು ಎಂಬುದು ತಜ್ಞರ ಅಭಿಮತ.
ಕನ್ನಡ ತಂತ್ರಾಂಶಗಳಲ್ಲಿ ಇಂದಿಗೂ ಹಲವು ಗೊಂದಲ ಇದೆ. ಕೆಲವೊಂದು ಕನ್ನಡ ತಂತ್ರಾಂಶದಲ್ಲಿ ಶ್ರೀ ಎಂದು ಅಚ್ಚು ಮಾಡಿದರೆ ಶ್ರೀಯಲ್ಲಿ ದೀರ್ಘವೂ ಸೇರಿದ ರಾಒತ್ತು ಬಂದ ಬಳಿಕವೂ ಪಕ್ಕದಲ್ಲೊಂದು ದೀರ್ಘ ಇರುತ್ತದೆ. ಯೂನಿಕೋಡ್‌ನ ಕೆಲವು ತಂತ್ರಾಂಶದಲ್ಲಿ ಅರ್ಧಕ್ಷರದ ಬಳಿಕ ಮತ್ತೊಂದು ಅಕ್ಷರ ಬಂದರೆ ಅದು ಒತ್ತಕ್ಷರವಾಗುತ್ತದೆ. ಉದಾಹರಣೆಗೆ ರಾಜ್‌ಕುಮಾರ್ ಎಂದು ಅಚ್ಚು ಮಾಡಿದರೆ ಅದು ರಾಜ್ಕುಮಾರ್ ಆಗುತ್ತದೆ. ಇಂಥ ಚಿಕ್ಕಪುಟ್ಟ ಸಮಸ್ಯೆಗಳನ್ನೂ ಬಗೆಹರಿಸದ ಪರಿಸ್ಥಿತಿ ನಿಜಕ್ಕೂ ಶೋಚನೀಯ.
ಕನ್ನಡದಲ್ಲಿ ಇಂದು ಬಹುತೇಕ ತಂತ್ರಾಂಶಗಳಲ್ಲಿ ಕಾಗುಣಿತದ ಜನ್ಯದಂತೆಯೇ ಅಂದರೆ ಕ ಅ  ಕಕ ಆ ಕಾಕ ಇ ಕಿ.. ಎನ್ನುವಂತೆ ವಿನ್ಯಾಸ ಮಾಡಲಾಗಿದೆ. ಇನ್ನು ಕೆಲವು ತಂತ್ರಾಂಶಗಳಲ್ಲಿ ಹಿಂದಿನ ಟೈಪ್‌ರೈಟರ್ ಕೀಲಿ ಮಣೆ ಇದೆ. ಬರಹದಲ್ಲಿ ಕ ಎಂದು ಬರೆಯಲು ಕೆ ಕೀಲಿ ಒತ್ತಿದ ಬಳಿಕ ಎ ಒತ್ತಬೇಕುಕೆಲವರಿಗೆ ಇದು ಸುಲಭ. ಮತ್ತೆ ಕೆಲವರಿಗೆ ಕೆ ಕೀಲಿ ಒತ್ತಿದ ಕೂಡಲೆ ಕ ಬರುವ ತಂತ್ರಾಂಶ ಸುಲಭ. ಹೀಗಾಗಿಯೇ ಈಗಿನ ತಂತ್ರಾಂಶಗಳಲ್ಲಿ ಎಲ್ಲ ಬಗೆಯ ಕೀಲಿಮಣೆಯ ಅವಕಾಶವನ್ನೂ ಕೊಡುತ್ತಾರೆ. ಯಾರು ಯಾವುದು ಬೇಕೋ ಅದನ್ನು ಬಳಸಬಹುದು. ಆದರೆ ಇಂಗ್ಲಿಷ್‌ನಲ್ಲಿರುವಂತೆ ಒಂದೇ ಮಾದರಿ ಕೀಲಿಮಣೆ ಇದ್ದರೆ ಚೆನ್ನ. ಇನ್ನು ಕೀಲಿಮಣೆಗಳಲ್ಲಿ ಕನ್ನಡದ ಕೀಲಿಮಣೆ ಇರುವ ಕಂಪ್ಯೂಟರ್‌ಗಳೇ ಇಲ್ಲ. ಇದಕ್ಕೆ ಕಾರಣ ಕೀಲಿ ಮಣೆಗಳಲ್ಲಿ ಇರುವ ಗೊಂದಲ. ಹಾಗೆ ಬೇಕಾದವರು ತಮ್ಮ ತಮ್ಮ ತಂತ್ರಾಂಶದ ಸ್ಟಿಕ್ಕರ್ ಅಂಟಿಸಿಕೊಳ್ಳಬೇಕಾದ ಸ್ಥಿತಿ. ಇನ್ನು ಕನ್ನಡದಲ್ಲಿ ಇಂಗ್ಲಿಷ್‌ನಲ್ಲಿರುವಂತೆ ವ್ಯಾಕರಣಕಾಗುಣಿತ ಸರಿಯಿದೆಯೇ ಎಂದು ಪರೀಕ್ಷಿಸುವ ವ್ಯವಸ್ಥೆ ಇಲ್ಲ. ಕೆಲವು ತಂತ್ರಾಂಶದಲ್ಲಿ ನಾವೇ ಕನ್ನಡ ನಿಘಂಟು ಸೇರ್ಪಡೆ ಮಾಡಿಕೊಳ್ಳುವ ಅವಕಾಶ ಇದೆ. ಅದರೆ ಇದು ಬಳಸುವವರ ಸ್ನೇಹಿಯಾಗಿಲ್ಲ. ಎಲ್ಲ ಕಂಪ್ಯೂಟರ್‌ಗಳಲ್ಲೂ ಕನ್ನಡ ನಿಘಂಟು ಅಳವಡಿಸಿದರೆ ಕನ್ನಡದಲ್ಲಿ ತಪ್ಪುಗಳು ಬರುವುದನ್ನು ತಡೆಯಲು ಸಾಧ್ಯ. ಆದರೆ ಈ ಬಗ್ಗೆ ಕಾಲು ಶತಮಾನ ಕಳೆದರೂ ಪ್ರಗತಿ ಆಗದಿರುವುದು ನಿಜಕ್ಕೂ ಶೋಚನೀಯ.
ಬೆಂಗಳೂರು ದೇಶದ ಸಿಲಿಕಾನ್ ನಗರಿ. ಇಡೀ ವಿಶ್ವವೇ ತಂತ್ರಾಂಶ ಎಂದರೆ ಬೆಂಗಳೂರಿನತ್ತ ತಿರುಗಿ ನೋಡುತ್ತದೆ. ಇಲ್ಲಿನ ಕನ್ನಡಿಗರ ಬುದ್ಧಿಗೆ ವಿದೇಶದಲ್ಲಿ ಬಂಗಾರದ ಬೆಲೆ ಇದೆ. ಆದರೂ ಅವರು ಕನ್ನಡ ತಂತ್ರಾಂಶದಲ್ಲಿ ಇಂಥ ಸುಧಾರಣೆ ಮಾಡಿಅದು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡುವ ಪ್ರಯತ್ನ ಮಾಡಿಲ್ಲ. ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸರ್ಕಾರಸಾಹಿತ್ಯ ಸಮ್ಮೇಳನ ನಡೆಸಿ ಕನ್ನಡ ಉಳಿಸಿ ಎನ್ನುವ ಸಾಹಿತ್ಯ ಪರಿಷತ್ತುಕರ್ನಾಟಕ ಸರ್ಕಾರದಲ್ಲಿರುವ ಮಾಹಿತಿ ತಂತ್ರಜ್ಞಾನ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ತಂತ್ರಾಂಶದಲ್ಲಿ ನಿಘಂಟು ಬಳಕೆಯ ಬಗ್ಗೆ ಗಮನ ಹರಿಸುವುದು  ಅತ್ಯಗತ್ಯ.
ಕನ್ನಡ ಉಳಿಯಲು ಕನ್ನಡ ಬೆಳಗಲು ಇದು. ಅಗತ್ಯ. ಕನ್ನಡನಾಡಿನಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಎಲ್ಲವೂ ಕನ್ನಡಮಯ ಆಗಬೇಕು. ಕಂಪ್ಯೂಟರ್‌ನಲ್ಲಿ ಕೂಡ ಅಲ್ಲವೇ?

No comments:

Post a Comment